Contact Angle Touch Studio for your Blog Design. Visit Site

ಅಡೂರಿನ ಐತಿಹ್ಯ

1 min read


           ದ್ವಾಪರ ಯುಗದಲ್ಲಿ ಅರ್ಜುನನು ಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ ತಪಸ್ಸಿಗೆ ಹೊರಟು, ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಕೌಡಿಂಕಾನವೆಂಬ ಕಠಿಣ ಕಾನನ ಪ್ರದೇಶವನ್ನು ತನ್ನ ತಪೋಭೂಮಿಯನ್ನಾಗಿ ಮಾಡಿಕೊಳ್ಳುತ್ತಾನೆ. ಈತನ ತಪಸ್ಸಿನ ಪರೀಕ್ಷಾರ್ಥವಾಗಿ ಕಿರಾತ ರೂಪಿಯಾಗಿ ಧರೆಗಿಳಿದ ಶಿವ, ಮೃತ ಹಂದಿಯೊಂದರ ಹಕ್ಕು ಸ್ಥಾಪನೆಯ ವಿಷಯದಲ್ಲಿ ಅರ್ಜುನನಲ್ಲಿ ಕಾದಾಟಕ್ಕಿಳಿಯುತ್ತಾನೆ. ಪರಿಣಾಮವಾಗಿ ಕಿರಾತ ರೂಪಿ ಶಿವ ಹಾಗೂ ಅರ್ಜುನನ ಮಧ್ಯೆ ಭಾರೀ ಕದನ ಆರಂಭವಾಗುತ್ತದೆ. ಈ ಕಾದಾಟದಲ್ಲಿ ಅರ್ಜುನನು ಸೋಲುತ್ತಾನೆ. 

   ಇವರಿಬ್ಬರೂ ಉರುಡಾಡಿದ ಊರೇ 'ಉರುಡೂರು' ಎಂದಾಯಿತು. ಅದು ಬಾಯ್ಮಾತಿನಲ್ಲಿ ಅಡೂರಾಗಿ ಪರಿವರ್ತನೆಯಾಯಿತು ಎಂಬುದು ಇಲ್ಲಿನ ಸ್ಥಳ ಐತಿಹ್ಯ. ಇಲ್ಲಿನ ಅಂಚೆ ಕಚೇರಿಗೆ ಈಗಲೂ 'ಉರುಡೂರು' ಎಂಬ ಹೆಸರಿದೆ. ಸೋತ ಅರ್ಜುನನು ಮತ್ತೆ ಶಕ್ತಿ ಸಂಚಯನಕ್ಕಾಗಿ ಶಿವಧ್ಯಾನ ಮಾಡಿ ಅರ್ಚಿಸುತ್ತಾನೆ. ಮಳಲ ಲಿಂಗವನ್ನು ರೂಪಿಸಿ, ಭಕ್ತಿಯಿಂದ ಆತ ಅರ್ಪಿಸಿದ ಹೂವುಗಳೆಲ್ಲವೂ, ಅಲ್ಲೇ ಇದ್ದ ಕಿರಾತ ರೂಪಿ ಶಿವನ ತಲೆಗೇರುತ್ತಿದ್ದುದನ್ನು ಕಂಡು ಸತ್ಯ ತಿಳಿಯುತ್ತಾನೆ. ತನ್ನ ದುಡುಕುತನಕ್ಕೆ ಮರುಗಿ ಕಿರಾತ ರೂಪಿ ಶಿವನಲ್ಲಿ ಕ್ಷಮೆ ಯಾಚಿಸುತ್ತಾನೆ. ಪ್ರಸನ್ನನಾದ ಪರಶಿವನು ಪಾಶುಪತಾಸ್ತ್ರ ಕರುಣಿಸಿದರೆ, ಇವರಿಬ್ಬರ ಕಾದಾಟವನ್ನು ರಕ್ತೇಶ್ವರಿಯೊಂದಿಗೆ ದೂರದಲ್ಲೇ ನಿಂತು ವೀಕ್ಷಿಸುತ್ತಿದ್ದ, ಪಾರ್ವತಿಯು ಅಂಜನಾಸ್ತ್ರವನ್ನು ಅರ್ಜುನನಿಗೆ ಕರುಣಿಸುತ್ತಾರೆ.

You may like these posts

  • ಅನಿರೀಕ್ಷಿತವಾಗಿ ಸುಬ್ರಹ್ಮಣ್ಯ ಹೋಗುವ ಸಂದರ್ಭ ಒದಗಿ ಬಂತು. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದು ಊಟ ಮುಗಿಸಿ ಹೊರಬಂದು ಮತ್ತೆ ಬಸ್ ಸ್ಟ್ಯಾಂಡ್‌ಗೆ ಹೋಗುವ ದಾರಿ. ಸುಡುವ ಸೂರ್ಯನ ಬಿಸಿಲು ನೈಸ್ ಡಾಮರ್ ನೆಲದಲ್ಲಿ…
  • "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ", ಎಂಬ ಬಸವಣ್ಣನವರ ವಚನವು ಭಾವಾರ್ಥದ ಮುಖಾಂತರ ಅಜಗಜಾಂತರ ದೊಡ್ಡ ಅರ್ಥವನ್ನು ವಿವರಿಸುತ್ತದಾದರೂ, ಮೊಬೈಲ್ ಫೋನ್ ಇಂದು ಜನಮನದಾಳದಲ್ಲಿ ಹಾಸುಹೊಕ್ಕಾಗಿರುವ 'ಜಂಗಮ ಯಂತ್ರ' ಈ ನುಡಿ…
  •  ನಿನ್ನೆ ನಮ್ಮ ಮನೆಗೆ ಬಾಲಣ್ಣ ಮತ್ತು ಅವರ ಹೆಂಡತಿ ಮಧ್ಯಾಹ್ನದ ಹೊತ್ತಿಗೆ ಬಂದರು. ನಿನ್ನೆ ಭಾನುವಾರ ಆದಕಾರಣ ಅಪ್ಪ ಮಧ್ಯಾಹ್ನವೇ ಅಂಗಡಿ ಬಂದ್ ಮಾಡಿ ಮನೆಗೆ ಬಂದಿದ್ದರು.  ನಮ್ಮ ಮನೆಯ ಜಗಲಿಯಲ್ಲಿರುವ ಕಬ್ಬಿಣ…
  •            ದ್ವಾಪರ ಯುಗದಲ್ಲಿ ಅರ್ಜುನನು ಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ ತಪಸ್ಸಿಗೆ ಹೊರಟು, ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರು…
  • ನಮ್ಮ ತೋಟದ ಮನೆಯ ಕಡೆ, ದಿನದಲ್ಲಿ ಒಮ್ಮೆಯಾದರೂ ಯಾರಾದರೂ ಹೋಗಿ ಬರುವುದುಂಟು. ಸದ್ಯ ಮನೆಯಲ್ಲೇ ಇದ್ದು , ಹೇಳಿಕೊಳ್ಳುವ ಪ್ರತ್ಯೇಕ ಕೆಲಸವಿಲ್ಲದಿರುವ ನಾನು, ಎಂದಿನಂತೆ ಇಂದು ಕೂಡಾ ಸಂಜೆಯ ಹೊತ್ತಿಗೆ ತೋಟದಲ್ಲಿ ಸುತ್ತಾಡಿ…
  • • ಮುನ್ನುಡಿ ಸ್ವಾತಂತ್ರ್ಯ, ಎಂಬುದು ರಾಷ್ಟ್ರದ ಸ್ವಚಿಂತನೆಯ ಅಧಿಕಾರಕ್ಕೆ ಮತ್ತು ದೇಶದ ನಾಗರಿಕರ ವಿಶಾಲ ಚಿಂತನೆಗೆ ಅವಕಾಶ ಒದಗಿಸುತ್ತದೆ. ನಾಗರಿಕರಿಗೆ ಒದಗಿಸಲ್ಪಟ್ಟ ಎಲ್ಲಾ ಅವಕಾಶಗಳು, ಸೌಲಭ್ಯ ಮತ್ತು ಚಲಾಯಿಸಬಹುದಾದ …

1 comment

  1. second ago
    Hi