Contact Angle Touch Studio for your Blog Design. Visit Site
Posts

ಕ-ವನ

0 min read


ವಿಯು ಕೂಗಿ ಕರೆದನೋ

ಕಾಡು ಬಳಿಗೆ ಸೆಳೆಯಿತೋ,

ಕಿಸೆಯು ಖಾಲಿ ಆಗಿರಲು

ಕೀಲಿ ತಿರುಗಿಸಿ ಹೊರಡಲು,

ಕುಳಿತು ಬೈಕಿನ ಮೇಲೆ ಹಾಗೆ

ಕೂರಿಸಿ ಕನಸನೂ ಜೊತೆಗೆ,

ಕೃತಕ ಲೋಕದಾ ನಿತ್ರಾಣ

ಕೆಲಕಾಲದ ಬಿಡುವು ಪಯಣ,

ಕೇಳಿದೊಂದು ಆಸೆಗೆ

ಕೈಯ ಹಿಡಿದು ಕಾಡಿಗೆ,

ಕೊಟ್ಟ ಮಾತನು ಉಳಿಸಿ 

ಕೋತಿ ಆನೆಗಳ ತೋರಿಸಿ,

ಕೌತುಕ ಕಣ್ಣುಗಳನು ಸರಿಸಿ

ಕಂದನಿಗೆ ಸವಿ ನೋಟ ಉಣಿಸಿ,

ಕಃತ್ತಲಾಗುವ ಮೊದಲು ಮನೆಯ ಕಡೆ ಹೆಜ್ಜೆ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

You may like these posts

  • "ತುಳುನಾಡು" ಕಲೆಗಳಿಗೆ, ಆಚಾರಗಳಿಗೆ, ಭೂತ-ನೇಮ ಮುಂತಾದ ಪಾರಂಪರಿಕ ಅನುಷ್ಠಾನಗಳಿಗೆ ಹೆಸರುವಾಸಿ. ಇತರ ಪ್ರದೇಶಗಳಿಗೆ ಹೋಲಿಸಿದರೆ ತುಳುನಾಡಿನಲ್ಲಿ ಕಂಡುಬರುವ ದೈವಿಕ ಭಾವನೆ ಹಾಗೂ ಆಚರಣೆಗಳೇ ಹೆಚ್ಚು. ಉತ್ತರಕ್ಕೆ ಮುಖಮ…
  • ಭಾರತ ಎಂಬುದು ಪೌರಾಣಿಕ ವೃಷಭದೇವನ ಮಗ ಭರತ ಚಕ್ರವರ್ತಿ ಬಂದ ಹೆಸರು ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದ ಹೆಸರು ಮಾತ್ರವಲ್ಲ. ಅದು ಒಂದು ಪರಿಕಲ್ಪನೆ. ಮಾನವ :- ನವೀನತೆಯನ್ನು ಬಯಸುವ, …
  •  ಸ್ವಾರ್ಥಿಗಳ ಸಂತೆಯಲ್ಲಿಮೋಸ ವಂಚನೆಗಳಿಗೆ ಮಿತಿ ಇಲ್ಲ. ಸ್ನೇಹ ಪ್ರೀತಿಗಳಿಗಂತೂ ಬೆಲೆಯಿಲ್ಲ.  ಈ ರೀತಿ ನಿರಾಶಾವಾದಿಗಳಾದ ಕವಿಗಳು ಹೇಳುವುದು ಇದುವೇ ಸ್ವಾರ್ಥ ಮಿತಿ ಮೀರದಿರಲಿ ಪ್ರೀತಿ ತಿನಾಗೇ ಉದಯಿಸೀತು…
  • "ಹೌದು, ನಾವೇನು ಸಾಧಿಸಿದೆವು" ಮನಸ್ಸು ಮತ್ತೆ ಮತ್ತೆ ಪ್ರಶ್ನಿಸಿದರೂ, ಸಾಧಿಸಬೇಕಾದ್ದಿಲ್ಲ ಅಥವಾ ಎನೂ ಸಿಗಬೇಕಾದ್ದಿಲ್ಲ ಎಂದು ಸಮಾಧಾನವಿತ್ತು. ವರ್ತಮಾನದ ವರ್ತುಲತೆಗಳಲ್ಲಿ ಜೇನು - ಬೇವು, ಖುಷಿ - ಬೇಸರ ಹೇಗೋ ಹಾಗ…
  •                   ಅರಣ್ಯವು ಪ್ರಕೃತಿಯ ವಸ್ತುವೈಶಿಷ್ಟ್ಯತೆಗಳಲ್ಲಿ ಒಂದು. ವಿಕಾಸದ ಹಾದಿ ಹಿಡಿದ ವೈಜ್ಞಾನೀಕರಣ ಹಾಗೂ ನಗರೀಕರಣಗಳು ಈ ವಸ್ತುವೈಶಿಷ್ಟ್ಯತೆಗಳನ್ನು…
  • ಹಸಿರೇ ಉಸಿರಿನ ತವರು ಹಸಿರಿಗೆ ಉಸಿರು ನೀರು.  ಸಾಲುಗಳ ಎರಡರ ಮುಖೇನ ಮಾನವನ ಉಸಿರಿಗೂ ಭೂಮಿಯ ಹಸಿರಿಗೂ ನೀರಿಗೂ ಹೊಂದಿರುವ ಅವಿನಾಭಾವ ಸಂಬಂಧವನ್ನು ಬಿಂಬಿಸಿದ ಅಜ್ಞಾತಕವಿಗೆ ನಮಿಸಬೇಕು. ನೀರು ಬಾಯಿ ಚಪ್ಪರಿಕ…

1 comment

  1. second ago
    ಬರಹ ಇನ್ನಷ್ಟು ಮುಂದುವರಿಯುತ್ತಿರಲಿ....