Contact Angle Touch Studio for your Blog Design. Visit Site
Posts

ಕ-ವನ

0 min read


ವಿಯು ಕೂಗಿ ಕರೆದನೋ

ಕಾಡು ಬಳಿಗೆ ಸೆಳೆಯಿತೋ,

ಕಿಸೆಯು ಖಾಲಿ ಆಗಿರಲು

ಕೀಲಿ ತಿರುಗಿಸಿ ಹೊರಡಲು,

ಕುಳಿತು ಬೈಕಿನ ಮೇಲೆ ಹಾಗೆ

ಕೂರಿಸಿ ಕನಸನೂ ಜೊತೆಗೆ,

ಕೃತಕ ಲೋಕದಾ ನಿತ್ರಾಣ

ಕೆಲಕಾಲದ ಬಿಡುವು ಪಯಣ,

ಕೇಳಿದೊಂದು ಆಸೆಗೆ

ಕೈಯ ಹಿಡಿದು ಕಾಡಿಗೆ,

ಕೊಟ್ಟ ಮಾತನು ಉಳಿಸಿ 

ಕೋತಿ ಆನೆಗಳ ತೋರಿಸಿ,

ಕೌತುಕ ಕಣ್ಣುಗಳನು ಸರಿಸಿ

ಕಂದನಿಗೆ ಸವಿ ನೋಟ ಉಣಿಸಿ,

ಕಃತ್ತಲಾಗುವ ಮೊದಲು ಮನೆಯ ಕಡೆ ಹೆಜ್ಜೆ.

ಕಾಸರಗೋಡಿನ ಅಡೂರಿನಲ್ಲಿ ವಾಸವಾಗಿರುವ ನಾನು ಲೇಖನ, ಪ್ರಬಂಧ, ಕತೆ, ಕವನಗಳನ್ನು ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿಯೂ ತೊಡಗಿಸಿಕೊಂಡಿದ್ದೇನೆ.

You may like these posts

  •  ನಾನು ಸ್ವಂತಿಕೆಯ ಲೇಖನ ಬರೆಯುವುದನ್ನು ನಿಲ್ಲಿಸಿ, ಈಗ ಮತ್ತೆ ಅದ್ಯಾಕೋ ಬರೆಯಬೇಕು ಅಂತ ಅನ್ನಿಸುವುದರ ಮದ್ಯೆ 'ನಾನು ಸಾಕಷ್ಟು ಬದಲಾಗಿದ್ದೇನೆ' ಎನ್ನುವುದು ಅನುಭವಕ್ಕೆ ಬರುತ್ತಿದೆ. ವಿಷಯ ಸಂಬಂಧಿತವಾಗಿ ವಿಶ್ಲೇಷ…
  • • ಮುನ್ನುಡಿ ಸ್ವಾತಂತ್ರ್ಯ, ಎಂಬುದು ರಾಷ್ಟ್ರದ ಸ್ವಚಿಂತನೆಯ ಅಧಿಕಾರಕ್ಕೆ ಮತ್ತು ದೇಶದ ನಾಗರಿಕರ ವಿಶಾಲ ಚಿಂತನೆಗೆ ಅವಕಾಶ ಒದಗಿಸುತ್ತದೆ. ನಾಗರಿಕರಿಗೆ ಒದಗಿಸಲ್ಪಟ್ಟ ಎಲ್ಲಾ ಅವಕಾಶಗಳು, ಸೌಲಭ್ಯ ಮತ್ತು ಚಲಾಯಿಸಬಹುದಾದ …
  • ಕನಸು ಕಂಗಳ ತನುವಿಗೆ ಮಳೆಹನಿಯ ಸ್ಪರ್ಶಕಣ್ಣು ಆಗಸದಾಚೆ ಎತ್ತಿ ನೋಡುವ ಹರ್ಷಮನೆ ಮಾಡು ಸೋರುವುದು ಸರಿಮಾಡೊ ಕಷ್ಟಒಣಗಿಸಿದ ಸೆಂಡಿಗೆಯ ಒಳತರುವ ಓಟಹಲಸು ಸೋಟೆಗೆ ಅಮ್ಮನ ಒಪ್ಪಿಸುವ ಕೆಲಸಅಜ್ಜಿಕತೆಯನು ಬಯಸಿ ಆಚೀಚೆ ಅಲೆದಾಟಮಳ…
  •            ದ್ವಾಪರ ಯುಗದಲ್ಲಿ ಅರ್ಜುನನು ಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ ತಪಸ್ಸಿಗೆ ಹೊರಟು, ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರು…
  •  ನಿನ್ನೆ ನಮ್ಮ ಮನೆಗೆ ಬಾಲಣ್ಣ ಮತ್ತು ಅವರ ಹೆಂಡತಿ ಮಧ್ಯಾಹ್ನದ ಹೊತ್ತಿಗೆ ಬಂದರು. ನಿನ್ನೆ ಭಾನುವಾರ ಆದಕಾರಣ ಅಪ್ಪ ಮಧ್ಯಾಹ್ನವೇ ಅಂಗಡಿ ಬಂದ್ ಮಾಡಿ ಮನೆಗೆ ಬಂದಿದ್ದರು.  ನಮ್ಮ ಮನೆಯ ಜಗಲಿಯಲ್ಲಿರುವ ಕಬ್ಬಿಣ…
  • "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ", ಎಂಬ ಬಸವಣ್ಣನವರ ವಚನವು ಭಾವಾರ್ಥದ ಮುಖಾಂತರ ಅಜಗಜಾಂತರ ದೊಡ್ಡ ಅರ್ಥವನ್ನು ವಿವರಿಸುತ್ತದಾದರೂ, ಮೊಬೈಲ್ ಫೋನ್ ಇಂದು ಜನಮನದಾಳದಲ್ಲಿ ಹಾಸುಹೊಕ್ಕಾಗಿರುವ 'ಜಂಗಮ ಯಂತ್ರ' ಈ ನುಡಿ…

1 comment

  1. second ago
    ಬರಹ ಇನ್ನಷ್ಟು ಮುಂದುವರಿಯುತ್ತಿರಲಿ....